ಶಾಲಾ ಶಿಕ್ಷಣ ಇಲಾಖೆ  ಆಯುಕ್ತರ ಕಛೇರಿ ಕಲ್ಬುರ್ಗಿ ವಿಭಾಗ,  ಕಲ್ಬುರ್ಗಿ

ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಛೇರಿ ಕಲ್ಬುರ್ಗಿ ವಿಭಾಗ, ಕಲ್ಬುರ್ಗಿ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಪರಿಚಯ

 

ಈಶಾನ್ಯ ಕರ್ನಾಟಕ 

ಪಕ್ಷಿ ನೋಟ (ಅವಲೋಕನ):

       ಗುಲ್ಬರ್ಗಾ ವಿಭಾಗದ ಮಕ್ಕಳನ್ನು ಉತ್ತಮ ಜ್ಞಾನ, ಕೌಶಲ್ಯ, ವರ್ತನೆಗಳು, ಮೌಲ್ಯಗಳು ಮತ್ತು ಇತರ ಸಾಮರ್ಥ್ಯಗಳೊಂದಿಗೆ ಸಜ್ಜುಗೊಳಿಸಲು ಅವರು ಉತ್ತಮ ಮಾನವರಾಗಲು ಮತ್ತು ಉತ್ಪಾದಕ ಮತ್ತು ಸಾಮಾಜಿಕವಾಗಿ ಜವಾಬ್ದಾರಿಯುತ ವ್ಯಕ್ತಿಗಳಿಗೆ ಅನುವು ಮಾಡಿಕೊಡಲು ಮತ್ತು ದಕ್ಷ, ಪರಿಣಾಮಕಾರಿ ಮತ್ತು ಯಶಸ್ವಿ ಪ್ರಜೆಗಳಾಗಿ ಕಾರ್ಯನಿರ್ವಹಿಸಲು ಮತ್ತು ಶ್ರೇಷ್ಠತೆಯನ್ನು ಸಾಧಿಸಲು ಯಾವುದೇ ಕ್ಷೇತ್ರದಲ್ಲಿ ಅವರು ಅರ್ಹರಾಗಿರುವಂತೆ ಮಾಡಲು
ಪರಿಚಯಿಸಿದೆ.

          ಶೈಕ್ಷಣಿಕವಾಗಿ ಈಶಾನ್ಯ ಕರ್ನಾಟಕ  ಹಿಂದುಳಿದ ಎಂಟು ಜಿಲ್ಲೆಗಳಾದ ಕಲಬುರಗಿ, ರಾಯಚೂರು, ಬೀದರ ಬಳ್ಳಾರಿ, ಬಿಜಾಪುರ, ಕೊಪ್ಪಳ, ಯಾದಗಿರ,ಬಾಗಲಕೋಟ ಜಿಲ್ಲೆಗಳಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಹಂತದ ಶಿಕ್ಷಣದಲ್ಲಿ ಪರಿಣಾಮ ಮಹತ್ತರವಾಗಿ ಹಾಗೂ ಗುಣಾತ್ಮಕವಾಗಿ ಅಭಿವೃದ್ದಿಪಡಿಸಲು ಜುಲೈ 10,2001 ರಲ್ಲಿ ಪ್ರತ್ಯೇಕವಾಗಿ ಈಶಾನ್ಯ ವಲಯ ನಿದೇ೵ಶನಾಲಯ ಕಛೇರಿ ಸ್ಥಾಪಿಸಲ್ಪಟ್ಟಿತು.

       ಈ ಕೆಳಗೆ ನಮೂದಿಸಿದ ಶೈಕ್ಷಣಿಕ ಸೂಚ್ಯಾಂಕಗಳನ್ವಯ  ಜಿಲ್ಲೆಗಳನ್ನು ರಾಜದಯದಲ್ಲಿಯೆ ಅತಿ ಹಿಂದುಳಿದ ಜಿಲ್ಲೆಗಳೆಂದು ಪರಿಗಣಿಸಲಾಗಿದೆ. ಈವಲಯದ ಸಾಕ್ಷರತಾ ಪ್ರಮಾಣವು 55.78% ಇದ್ದು,ಇದು ರಾಜ್ಯದ ಸರಾಸರಿ 67.04% ಗಿಂತಲು, ತೀರಾ ಕಡಿಮೆಯಾಗಿದೆ.(2001ರ ಸಾಮನ್ಯ ಜನಗಣತಿಯಂತೆ ಮಹಿಳಾ ಸಾಕ್ಷರತಾ ಪ್ರಮಾಣವು ರಾಜ್ಯ ಮತ್ತು ರಾಷ್ಟೃದಲ್ಲಿನ ಸರಾಸರಿಗಿಂತ ಕೆಳಗಿದೆ. ವಿವರಗಳನ್ನು ಕೋಷ್ಟಕದಲ್ಲಿ ನನೀಡಲಾಗಿದೆ.

          ಈ ಹಿಂದುಳಿದ ಈಶಾನ್ಯ ವಲಯದ ಜಿಲ್ಲೆಗಳಲ್ಲಿ ನಮೂದಿಸಿದ ಜಿಲ್ಲೆ ವಲಯಗಳಲ್ಲಿ ರಾಜ್ಯದಲ್ಲಿಯೆ ಅತ್ಯಂತ ಕನಿಷ್ಟ ಪ್ರಮಾಣದ ಮಹಿಳಾ ಸಾಕ್ಷರತಾ ಪ್ರಮಾಣವನ್ನು ಹೊಂದಿದೆ.

ಶಹಾಪುರ -26.97%

ಯಾದಗಿರಿ -26.90%

ದೇವದುಗ೵ -27.20%

ಜೇವಗಿ೵ - 29.86%

ಸುರಪುರ -3-.57%

ಮಾನವಿ 50.71%

ಸಿರಗುಪ್ಪ -30.83%

ಸೇಡಂ -33.45%

       ಈಶಾನ್ಯ ವಲಯದಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರ ಸರಾಸರಿ ಪ್ರಮಾಣವು 1:46 57 ರ ಅನುಪಾತದಲ್ಲಿದ್ದು ಇದು ರಾಜ್ಯದಲ್ಲಿನ ಸರಾಸರಿ 1:36.00 ರ ಪ್ರತಿಯಾಗಿದೆ.(ಕೋಷ್ಟಕ ವನ್ನು ಗೊಡಿ)

       ರಾಜ್ಯದ ದಕ್ಷಿಣವಲಯದ ಕೆಲ ಮುಂದುವರೆದ ಜಿಲ್ಲಿಗಳಲ್ಲಿ ಶಿಕ್ಷಕರ ಹಾಗೂ ಮಕ್ಕಳ ಅನುಪಾತ ಕಡಿಮೆ ಇದ್ದು ಬೆಂಗಳುರು ಗ್ರಾಮಾಂತರ 1:20, ಹಾಸನ1:25,ಚಿಕ್ಕಮಗಳೂರು1:24, ಮಂಡ್ಯ1:72 

       ಈಶಾನ್ಯ ವಲಯದ ಹಿಂದುಳಿದ  ಎಂಟು ಜಿಲ್ಲೆಗಳಲ್ಲಿ ಶಾಲೆಯಿಂದ ಹೊರಗುಳಿದ  ಮಕ್ಕಳ ಸರಾಸರಿ 51% ಇದ್ದು ಹಾಗೆಯೇ 2002ರ ಮಕ್ಕಳ ಗಣತಿಯ ಪ್ರಕಾರ ರಾಜ್ಯದಲ್ಲಿನ ಹೊರಗುಳಿದ ಮಕ್ಕಳ ಸಂಖ್ಯೆಯು 6.66 ಲಕ್ಷವಿದ್ದು ಅದರಲ್ಲಿ 3.36 ಲಕ್ಷ ಮಕ್ಕಳು ಈಶಾನ್ಯ ವಲಯದವರು.

  ಜಿಲ್ಲಾವಾರು ಅಂಕಿ-ಅಂಶವನ್ನು ಗಮನಿಸಿದಾಗ  ಪ್ರತಿಶತ ಅತಿಹೆಚ್ಚು ಶಾಲೆಯಿಂದ ಹೊರಗುಳಿದ ಮಕ್ಕಳು ಯಾದಗಿರಿಯಲ್ಲಿ(22.3%),ಕೊಪ್ಪಳದಲ್ಲಿ(16.31%),ಮತ್ತು ರಾಯಚೂರಿನಲ್ಲಿ(15.92%) ಇರುವುದು ಕಂಡುಬಂದಿದೆ.

 

 

ಹೆಚ್ಚು